Перейти к содержимому

ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ.

Eshwar Malpe

0:00 / 0:00

ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ.

1 195 190 просмотров · 3 года назад
Eshwar Malpe
266 тыс. подписчиков
1 195 190 просмотров · 3 года назад
ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ #rescue #dangerous #dam Eshwar Malpe social Activities Contact number : 9663434415 Instagram I'd: https://instagram.com/eshwar_malpe?ig... 🛑 ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ. 🛑 ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯ ಲಕ್ಕವಳ್ಳಿ ಗ್ರಾಮದ ಸಮಾಜ ಸೇವಕ ರೂ ಹಾಗೂ ಮೀನುಗಾರ ರೂ ಆದ ಕೃಷ್ಣ (46) ಎಂಬವರು ಮೀನುಗಾರಿಕೆ ಗೆ ತೆರಳಿದ್ದು, ಆಕಸ್ಮಿಕವಾಗಿ ಭದ್ರಾ ಡ್ಯಾಂ ನಲ್ಲಿ ನೀರಿಗೆ ಬಿದ್ದಿರುತ್ತಾರೆ . ಮೃತಪಟ್ಟ ಕೃಷ್ಣ ರವರು ಸಮಾಜ ಸೇವೆ ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸ್ಥಳೀಯರ ಸಮಸ್ಯೆಗಳಿಗೆ ಸಹಾಯ ಸಹಕಾರ ಮಾಡುತ್ತಾ , ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂತಹ ಕ್ಲಿಷ್ಟಕರ ಸನ್ನಿವೇಶ ವಿದ್ದರೂ ಸೇವೆ ಯನ್ನು ಮಾಡುವ ಮನೋಭಾವ ಹೊಂದಿದ್ದರು. ಅಗ್ನಿಶಾಮಕ ದಳ ದ ಸಿಬ್ಬಂದಿಗಳು ಸತತ ಎರಡು ಗಂಟೆ ಗಳ ಕಾಲ ಕಾರ್ಯಾಚರಣೆ ನಡೆಸಿದರೂ ಕೂಡ ಅವರ ಮೃತ ದೇಹ ವು ಸಿಕ್ಕಿರುವುದಿಲ್ಲ ಲಕ್ಕವಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ರವರು ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಈ ವಿಚಾರ ವನ್ನು ತಿಳಿಸಿದರು. ತಕ್ಷಣ ಕಾರ್ಯ ಪ್ರವ್ರತ್ತರಾದ ಆಪದ್ಬಾಂಧವ ಈಶ್ವರ್ ಮಲ್ಪೆ ಮಧ್ಯರಾತ್ರಿ 12:00 ಗಂಟೆಗೆ ಉಡುಪಿಯ ಮಲ್ಪೆಯಿಂದ ತನ್ನ ತಂಡ ದ ಜೊತೆ ಹೊರಟು ಬೆಳಿಗ್ಗೆ 4:00 ಗಂಟೆ ಯ ಸುಮಾರಿಗೆ ಲಕ್ಕವಳ್ಳಿ ಗೆ ತಲುಪಿದರು. ಸ್ಥಳೀಯರು ಮತ್ತು ಠಾಣಾಧಿಕಾರಿಯವರ ಅಭಿಪ್ರಾಯವನ್ನು ಪಡೆದುಕೊಂಡ ಈಶ್ವರ್ ಮಲ್ಪೆ ಬೆಳಿಗ್ಗೆ 7:00 ಗಂಟೆ ಯ ಹೊತ್ತಿಗೆ ಭದ್ರಾ ಡ್ಯಾಂ ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದರು. ಪೋಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಕ್ಷಮದಲ್ಲಿ , ಕೇವಲ 15 ನಿಮಿಷ ಗಳ ಚುರುಕಿನ ಕಾರ್ಯಾಚರಣೆ ಮಾಡಿ 90 ಅಡಿ ನೀರಿನ ಆಳದಲ್ಲಿ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಈಶ್ವರ್ ಮಲ್ಪೆಯವರು ಯಶಸ್ವಿಯಾಗಿದರು. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಆಪತ್ಬಾಂಧವ ಈಶ್ವರ್ ಮಲ್ಪೆ ಅವರ ಜೊತೆಗೆ ಬುರ್ಹಾನ್ ಮಲ್ಪೆ ರಕ್ಷಿತ್ ಕಾಪು ಸಹಕರಿಸಿದರು. TEAM ESHWAR MALPE Join this channel to get access to perks:    / @eshwarmalpe4415